ಇನ್ನು ಚಿನ್ನದ ಪದಕ ಗೆದ್ದಿರುವ ಮತ್ತೋರ್ವ ವಿದ್ಯಾರ್ಥಿ ವೆಂಕಟೇಶ್ ದೃಷ್ಟಿ ದೋಷ ಹೊಂದಿದ್ದು, ಬಿಎ (ಸಂಗೀತ) ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಇಂದಿರಾನಗರದಿಂದ ಎನ್ ಆರ್ ಕಾಲೋನಿಗೆ ಸಾರ್ವಜನಿಕ ಸಾರಿಗೆಯಲ್ಲೇ ವೆಂಕಟೇಶ್ ಸಂಚರಿಸುತ್ತಿದ್ದರು. ವಿದ್ಯಾಭ್ಯಾಸ ಮುಂದುವರೆಸಲು ಕೋಲಾರದಿಂದ ನನ್ನ ಅಣ್ಣನೊಂದಿಗೆ ಬೆಂಗಳೂರಿಗೆ ಬಂದಿದ್ದೇನೆ, ಚಿನ್ನದ ಪದಕ ಗೆದ್ದಿರುವ ಬಗ್ಗೆ ಹೆಮ್ಮೆ ಇದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.