ವಿಹಾರಕ್ಕೆಂದು ಬಂದಿದ್ದ ಮೂವರು ಯುವಕರು ಶಾಂಭವಿ ನದಿಯಲ್ಲಿ ಮುಳುಗಿ ನೀರುಪಾಲು

ಈಜಲು ತೆರಳಿದ್ದ ಮೂವರು ಯುವಕರು ಮೂಲ್ಕಿಯ ಮಟ್ಟುವಿನ ಶಾಂಭವಿ ನದಿಯಲ್ಲಿ ಮುಳುಗಿ ಜಲಸಮಾಧಿಯಾಗಿರುವ ದುರ್ಘಟನೆ ನಡೆದಿದೆ...
ಯುವಕ ನೀರಿನಲ್ಲಿ ಮುಳುಗುತ್ತಿರುವ ಸಂಗ್ರಹ ಚಿತ್ರ
ಯುವಕ ನೀರಿನಲ್ಲಿ ಮುಳುಗುತ್ತಿರುವ ಸಂಗ್ರಹ ಚಿತ್ರ
Updated on
ಮಂಗಳೂರು: ಈಜಲು ತೆರಳಿದ್ದ ಮೂವರು ಯುವಕರು ಮೂಲ್ಕಿಯ ಮಟ್ಟುವಿನ ಶಾಂಭವಿ ನದಿಯಲ್ಲಿ ಮುಳುಗಿ ಜಲಸಮಾಧಿಯಾಗಿರುವ ದುರ್ಘಟನೆ ನಡೆದಿದೆ. 
ಮಂಗಳೂರಿನ 11 ಮಂದಿ ಸ್ನೇಹಿತರು ವಿಹಾರಕ್ಕೆಂದು ಮೂಲ್ಕಿಗೆ ಬಂದಿದ್ದರು. ಈ ವೇಳೆ ಎಲ್ಲರೂ ನದಿಗೆ ಇಳಿದಿದ್ದ ನೀರಿನ ಸೆಳೆತಕ್ಕೆ ಸಿಲುಕಿ ಅಕ್ಷತ್, ಕಿಶೋರ್ ಮತ್ತು ಮಹೇಶ್ ಎನ್ನುವ ಯುವಕರು ನೀರು ಪಾಲಾಗಿದ್ದಾರೆ. 
ಮೃತರಲ್ಲಿ ಮಹೇಶ್ ಗೆ ಈಜು ಬರುತ್ತಿದ್ದು ಆದರೆ ಮತ್ತಿಬ್ಬರಿಗೂ ಈಜು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ. ದುರ್ಘಟನೆ ಬಳಿಕ ಸ್ಥಳೀಯರು ಮತ್ತು ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿ ಮೃತರ ದೇಹಗಳನ್ನು ಹೊರತೆಗೆದಿರುವುದಾಗಿ ವರದಿಯಾಗಿದೆ. ಈ ಸಂಬಂಧ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com