ನಾವು ರಾಷ್ಟ್ರಧ್ವಜಕ್ಕೆ ಎಂದಿನಂತೆಯೇ ಗೌರವ ನೀಡುತ್ತೇವೆ. ದೇಶದ ಸಂವಿಧಾನದಲ್ಲಿ ಯಾವತ್ತಿಗೂ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಇರಬೇಕು ಅಥವಾ ಇರಬಾರದೆಂದು ಹೇಳಿಲ್ಲ. ಹಾಗಿರುವಾಗ ಬಿಜೆಪಿ ಮತ್ತು ಜೆಡಿಎಸ್ ಅಸ್ಥಿತ್ವದಲ್ಲಿಲ್ಲದ ಷರತ್ತುಗಳನ್ನು ಏಕೆ ಉಲ್ಲೇಖಿಸುತ್ತದೆ? ಜೂನ್ 6ರಂದು ಇದಕ್ಕಾಗಿ ಸಮಿತಿ ರಚಿಸಲು ನಿರ್ಧರಿಸಿದೆವು. ಇದರ ಹಿಂದೆ ರಾಜಕೀಯ ಉದ್ದೇಶವಿಲ್ಲ. ರಾಷ್ಟ್ರಧ್ವಜ ನಮಗೆ ಯಾವತ್ತಿಗೂ ಮೇಲೆಯೇ ಎಂದು ಹೇಳಿದ್ದರು.