ರಾಜ್ಯ ಧ್ವಜದ ನಿರ್ಧಾರ ಕರ್ನಾಟಕ ಸರ್ಕಾರದ ರಾಜಕೀಯ ಗಿಮಿಕ್ ಎಂಬ ಕೇಂದ್ರದ ಆರೋಪವನ್ನು ನಿರಾಕರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿ ಒಂದೇ ರೀತಿಯ ವೈವಿಧ್ಯತೆಯಿಲ್ಲದ ದೇಶವನ್ನು ನೋಡಲು ಬಯಸುತ್ತದೆ. ಕರ್ನಾಟಕದಲ್ಲಿರುವ ವಿರೋಧ ಪಕ್ಷ ಬಿಜೆಪಿ ಹಿಂದಿ ಕೇಂದ್ರಿತವಾಗಿದೆ. ಅವರು ಒಂದೇ ರೀತಿಯ ದೇಶವನ್ನು ನೋಡಲು ಬಯಸುತ್ತಾರೆ. ಆ ಪಕ್ಷದವರು ಬೇರೆಯವರನ್ನು ನಂಬುವುದಿಲ್ಲ. ಅವರು ವೈವಿಧ್ಯತೆಯನ್ನು ಗೌರವಿಸುವುದು ಕೂಡ ಇಲ್ಲ ಎಂದು ಹೇಳಿದರು.