ಆದರೆ ಒಂದು ಹಂತದಲ್ಲಿ ನದಿಯ ನೀರು ಅಪಾಯದ ಮಟ್ಟ ಮೀರಿತು. ಆಗ ನಿಜಕ್ಕೂ ಈ ಐವರು ದಿಗಿಲುಗೊಂಡರು. ಕ್ಷಣಮಾತ್ರದಲ್ಲಿ ನದಿಯಲ್ಲಿದ್ದ ಬಂಡೆಯೊಂದಕ್ಕೆ ಹತ್ತಿದರು. ನದಿಯ ನೀರು ಬಂಡೆಯವರೆಗೆ ಬಾರದಿರಲಿ ಎಂದು ಪ್ರಾರ್ಥನೆ ಮಾಡುತ್ತಾ ಆ ಬಂಡೆಯಲ್ಲಿಯೇ 2 ಗಂಟೆಗೂ ಹೆಚ್ಚು ಕಾಲ ತಂಗಿದ್ದರು. ಆಗ ಗ್ರಾಮಸ್ಥರು ಅವರನ್ನು ನೋಡಿ ಏಣಿಯನ್ನು ನದಿಯ ಬಂಡೆಗೆ ಇಟ್ಟು ಆ ಮೂಲಕ ಹತ್ತಿರದ ಬಂಡೆಗೆ ಹೋಗಿ ನದಿ ದಡಕ್ಕೆ ತಲುಪುವಲ್ಲಿ ಯಶಸ್ವಿಯಾದರು.