ಗರ್ಭಿಣಿಯಾಗಿದ್ದ ಬಾನು ಈಗಲಾದರೂ ತಮ್ಮ ಕುಟುಂಬಸ್ಥರು ತಮ್ಮನ್ನು ಒಪ್ಪಿಕೊಳ್ಳಬಹುದು ಎಂಬ ಭರವಸೆಯೊಂದಿಗೆ ಮತ್ತೆ ಊರಿಗೆ ಬಂದಿದ್ದಳು. ಆದರೆ, ಆಕೆಯ ಪೋಷಕರು ಮನಃಸ್ಥಿತಿ ಮಾತ್ರ ಬದಲಾವಣೆಯಾಗಿರಲಿಲ್ಲ. ಬಾನು ಮತ್ತು ಶರಣಪ್ಪ ಮನೆ ಬಳಿ ಬರುತ್ತಿದ್ದಂತೆಯೇ ಬಾನು ಪೋಷಕರು ಜಗಳಕ್ಕೆ ಆರಂಭಿಸಿದ್ದಾರೆ. ಅಲ್ಲದೆ, ಶರಣಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶರಣಪ್ಪ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಹೋಗಿದ್ದಾನೆ.