ಪ್ರೀತಿ ವಿಚಾರ ತಿಳಿದು ಮಗಳನ್ನು ದೊಣ್ಣೆಯಿಂದ ಹೊಡೆದು ಕೊಂದ ತಾಯಿ

ಮಗಳ ಪ್ರೀತಿಯ ತಿಳಿದ ತಾಯಿ ಆಕೆಯನ್ನು ದೊಣ್ಣೆಯಿಂದ ಹೊಡೆದು ಕೊಂದಿರುವ ಘಟನೆ ಕೋಲಾರದ ಚಿನ್ನಾಪುರದಲ್ಲಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಕೋಲಾರ: ಮಗಳ ಪ್ರೀತಿಯ ತಿಳಿದ ತಾಯಿ ಆಕೆಯನ್ನು ದೊಣ್ಣೆಯಿಂದ ಹೊಡೆದು ಕೊಂದಿರುವ ಘಟನೆ ಕೋಲಾರದ ಚಿನ್ನಾಪುರದಲ್ಲಿ ನಡೆದಿದೆ. 
18 ವರ್ಷದ ರಾಜೇಶ್ವರಿ ತಾಯಿಯಿಂದ ಹತ್ಯೆಯಾದ ನತದೃಷ್ಟೆ. ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ರಾಜೇಶ್ವರಿ ಮೊನ್ನೆ ಬಂದ ಪಿಯು ಫಲಿತಾಂಶದಲ್ಲಿ ಫೇಲ್ ಆಗಿದ್ದಳು. ಇದರಿಂದ ತಾಯಿ 45 ವೆಂಕಟಮ್ಮ ಕೋಪಗೊಂಡಿದ್ದರು. ಈ ಮಧ್ಯೆ ತಮ್ಮ ಮಗಳು ಯುವಕನ ಪ್ರೀತಿಯಲ್ಲಿ ಬಿದ್ದಿರುವುದಾಗಿ ಗ್ರಾಮಸ್ಥರಿಂದ ತಿಳಿದ ಆಕೆ ಆವೇಶದಲ್ಲಿ ದೊಣ್ಣೆ ತೆಗೆದುಕೊಂಡು ಮಗಳನ್ನು ಕೊಂದು ಹಾಕಿದ್ದಾರೆ. 
ರಾಜೇಶ್ವರಿ ಏಳು ತಿಂಗಳ ಮಗುವಾಗಿದ್ದಾಗ ವೆಂಕಟಮ್ಮ ಗಂಡನನ್ನು ಕಳೆದುಕೊಂಡಿದ್ದರು. ಕೂಲಿ ಮಾಡುತ್ತಾ ಇಬ್ಬರು ಹೆಣ್ಣು ಮಕ್ಕಳು ಮತ್ತು ಗಂಡು ಮಗುವನ್ನು ಬೆಳೆಸಿದ್ದರು. ಮಗಳು ಪ್ರೀತಿಯಲ್ಲಿ ಬಿದ್ದಿರುವುದರಿಂದಲೇ ದ್ವಿತೀಯ ಪಿಯುಸಿಯಲ್ಲಿ ಫೇಲ್ ಆಗಿದ್ದಾಳೆ ಎಂದು ತಿಳಿದ ವೆಂಕಟಮ್ಮ ಆಕೆಯನ್ನು ಗದುರಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ವೆಂಕಟಮ್ಮ ದೊಣ್ಣೆ ಕೊಲಿನಿಂದ ಮಗಳ ತಲೆಗೆ ಹೊಡೆದಿದ್ದು ತೀವ್ರ ರಕ್ತಸಾವ್ರದಿಂದ ರಾಜೇಶ್ವರಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದು ಪ್ರಕರಣ ಸಂಬಂಧ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ವೆಂಕಟಮ್ಮನನ್ನು ವಶಕ್ಕೆ ಪಡೆದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com