ಕೆಲ ದಿನಗಳ ಹಿಂದೆ ಐಟಿ ಉದ್ಯೋಗಿಗಳ ವೇದಿಕೆ ಸದಸ್ಯರು(ಎಫ್ಐಟಿಇ) ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಭೇಟಿ ಮಾಡಿ, ಐಟಿ ಕಂಪೆನಿಗಳನ್ನು ಕೈಗಾರಿಕಾ ಉದ್ಯೋಗ(ಸ್ಥಾಯಿ ಆದೇಶ) ಕಾಯ್ದೆಯಡಿ ಸೇರಿಸಬೇಕೆಂದು ಒತ್ತಾಯಿಸಿದ್ದರು. ಎಫ್ಐಟಿಇ ಸದಸ್ಯರ ಪ್ರಕಾರ, ಅನಿಯಂತ್ರಿತವಾಗಿ ಕೆಲಸದಿಂದ ತೆಗೆದುಹಾಕುವುದು, ಅಧಿಕ ಕೆಲಸದ ಅವಧಿ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಇತ್ಯಾದಿಗಳಿಗೆ ಸರ್ಕಾರ ಮತ್ತು ಕಾನೂನಿನಲ್ಲಿ ನೆರವು ಸಿಗುವುದಿಲ್ಲ.