ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣಾ ಕಾನ್ಷಿಯಸ್ ನೆಸ್ ಗೆ ಗುತ್ತಿಗೆ ನೀಡುವ ಸಲಹೆ ಕೂಡ ಕೇಳಿಬಂದಿದೆ ಎಂದು ಬಿಬಿಎಂಪಿಯ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳುತ್ತಾರೆ. ಅದು ಬಿಬಿಎಂಪಿ ಕೌನ್ಸಿಲ್ ನಲ್ಲಿ ಚರ್ಚೆಯಾಗಿ ತೀರ್ಮಾನಕ್ಕೆ ಬರಲಾಗುವುದು. ತಮಿಳುನಾಡಿನ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿಯೇ ಮೆನುಗಳಿರುತ್ತವೆ. 5 ರೂಪಾಯಿಗೆ ಇಡ್ಲಿ, ಉಪ್ಮಾ, ಪೊಹಾ, ಪೊಂಗಲ್, ರೈಸ್ ಬಾತ್ ಮೊದಲಾದವುಗಳನ್ನು ನೀಡಲಾಗುವುದು. 10 ರೂಪಾಯಿಗೆ ಅನ್ನ-ಸಾಂಬಾರ್, ಅನ್ನ-ರಸಂ, ಮುದ್ದೆ ಸಾರು ಮೊದಲಾದವುಗಳು ಇರುತ್ತವೆ ಎಂದು ಹೇಳಿದರು.