ಗುಡಿಸಲಿಗೆ ಕುಸಿದು ಬಿದ್ದ ಬಂಡೆ ಕಲ್ಲು: ಬಾಲಕ ಸಾವು, ಮೂವರಿಗೆ ಗಾಯ

ಬೆಟ್ಟ ಪ್ರದೇಶದಿಂದ ದೊಡ್ಡ ಬಂಡೆಯೊಂದು ಜಾರಿ ಗುಡಿಸಲಿನ ಮೇಲೆ ಬಿದ್ದ ಪರಿಣಾಮ ಬಾಲಕ ಮೃತಪಟ್ಟು...
ಬಳ್ಳಾರಿಯಲ್ಲಿ ಗುಡಿಸಲಿಗೆ ಬಿದ್ದ ಬಂಡೆಕಲ್ಲು
ಬಳ್ಳಾರಿಯಲ್ಲಿ ಗುಡಿಸಲಿಗೆ ಬಿದ್ದ ಬಂಡೆಕಲ್ಲು
ಬಳ್ಳಾರಿ: ಬೆಟ್ಟ ಪ್ರದೇಶದಿಂದ ದೊಡ್ಡ ಬಂಡೆಯೊಂದು ಕುಸಿದು ಗುಡಿಸಲಿನ ಮೇಲೆ ಬಿದ್ದ ಪರಿಣಾಮ ಬಾಲಕ ಮೃತಪಟ್ಟು ಇತರ ಮೂವರು ಗಾಯಗೊಂಡ ಘಟನೆ ಬಳ್ಳಾರಿಯ ನಾಗಲಕೆರೆ ಎಂಬಲ್ಲಿ ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಸಂಭವಿಸಿದೆ. ಭಾರೀ ಗುಡುಗು ಮಿಂಚು ಬಡಿದು ಬಂಡೆಕಲ್ಲು ಕುಸಿದು ಬಿದ್ದಿರಬಹುದು ಎಂದು ನಂಬಲಾಗಿದೆ.
ಮೃತ ಬಾಲಕನನ್ನು ಶಿವ ಎಂದು ಗುರುತಿಸಲಾಗಿದೆ. ಬಸಪ್ಪ, ಯಲ್ಲಮ್ಮ ಮತ್ತು ಯಶೋಧ ಎಂಬುವವರಿಗೆ ಗಾಯಗಳಾಗಿದ್ದು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸೇರಿಸಲಾಗಿದೆ.
ಬಳ್ಳಾರಿ ನಗರ ಪಾಲಿಕೆ ಮೇಯರ್ ಜಿ. ವೆಂಕಟರಮಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೌಲ್ ಬಜಾರ್ ಪೊಲೀಸರು ಕೇಸು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com