ಕುಡಿದು ಕಾರು ಚಾಲನೆ ಮಾಡಿ ಅಪಘಾತ: ಚಾಲಕ ಸಾವು

ನೆಲಮಂಗಲ ಹೆದ್ದಾರಿಯಲ್ಲಿ 25 ವರ್ಷದ ಯುವಕ ಕುಡಿದು ಕಾರು ಚಾಲನೆ ಮಾಡಿ ಎಂಟು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು ಅಪಘಾತ ಆತ ಸಾವನ್ನಪ್ಪಿದ್ದಾನೆ...
ಅಪಘಾತ
ಅಪಘಾತ
Updated on
ಬೆಂಗಳೂರು: ನೆಲಮಂಗಲ ಹೆದ್ದಾರಿಯಲ್ಲಿ 25 ವರ್ಷದ ಯುವಕ ಕುಡಿದು ಕಾರು ಚಾಲನೆ ಮಾಡಿ ಎಂಟು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು ಅಪಘಾತ ಆತ ಸಾವನ್ನಪ್ಪಿದ್ದಾನೆ. 
ನೆಲಮಂಗಲದ ಬುದ್ದಿಹಾಲ್ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಮೃತ ಯುವಕ ದರ್ಶನ್ ಎಂದು ತಿಳಿದುಬಂದಿದ್ದು ಆತ ರಾಮನಗರ ತಾವರೆಕೆರೆ ಮೂಲದವನಾಗಿದ್ದು ನಿನ್ನೆ ಕಂಠಪೂರ್ತಿ ಕೂಡಿದು ಕಾರು ಚಾಲನೆ ಮಾಡಿದ್ದಾನೆ.
ದರ್ಶನ್ ಪಾನಮತ್ತನಾಗಿದ್ದು ಸ್ವಿಫ್ಟ್ ಡಿಸೈರೋ ಕಾರನ್ನು ಎದ್ವತದ್ವ ಚಲಾಯಿಸಿ ಹೆದ್ದಾರಿಯಲ್ಲಿ ಎಂಟು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಮೂರು ಕಾರು ಮತ್ತು ಎರಡು ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ ಪರಿಣಾಮ ಆತ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಇನ್ನು ಬೈಕ್ ಸವಾರರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com