ವಿಚಾರಣೆಗೊಳಗಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ವಿಚಾರಣೆ ವೇಳೆ ನನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದೇನೆ. ನಾನು ಈ ವಿಚಾರದಲ್ಲಿ ಭಾಗಿಯಾಗಿಲ್ಲ. ಯಾವುದೇ ಅಧಿಕಾರಿಗಳ ಮೇಲೆ ನಾನು ಯಾವುದೇ ರೀತಿಯ ಒತ್ತಡಗಳನ್ನು ಹೇರಿರಲಿಲ್ಲ. ಗಣಿ ವಿಚಾರದಲ್ಲಿ ವೈಯಕ್ತಿಯ ಆಸಕ್ತಿಯೂ ಇಲ್ಲ. ಹೀಗಿರುವಾಗ ಅಕ್ರಮವಾಗಿ ಅನುಮತಿ ನೀಡುವಂತೆ ನಾನೇಕ ಅಧಿಕಾರಿಗಳಿಗೆ ತಿಳಿಸಲಿ? ಎಂದು ಹೇಳಿದ್ದಾರೆ.