ಪೆರಿಯಾಪಟ್ಟಣ ತಾಲ್ಲೂಕಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಸಂಚಿತಾ ಎಂ.ಅರದ(20 ವರ್ಷ) ತೀವ್ರ ಜ್ವರದಿಂದ ಬಳಲುತ್ತಿದ್ದಳು. ಹಾಸ್ಟೆಲ್ ಶುಲ್ಕ ಪಾವತಿಸುವವರೆಗೆ ವಾರ್ಡನ್ ಆಕೆಯನ್ನು ಮನೆಗೆ ಹೋಗಲು ಬಿಟ್ಟಿರಲಿಲ್ಲ. ಕೊನೆಗೆ ಊರಿಗೆ ಹೋದ ಮೇಲೆ ಆಕೆಯ ಪೋಷಕರು ಜೆಎಸ್ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಒಂದು ವಾರದವರೆಗೆ ಸಾವು ಬದುಕಿನ ನಡುವೆ ಹೋರಾಟ ನಡೆಸಿ ನಿನ್ನೆ ಅಪರಾಹ್ನ ಮೃತಪಟ್ಟಿದ್ದಾಳೆ. ಆಕೆ ಹಾಸ್ಟೆಲ್ ಗೆ ಪ್ರವೇಶ ಶುಲ್ಕ 7,500 ಮತ್ತು ತಿಂಗಳ ಶುಲ್ಕ 1,500ನ್ನು ಪಾವತಿಸಿದ್ದಳು.