ರೈತರ ಸಾಲಮನ್ನಾಗಾಗಿ ಈ ವರೆಗೂ ಸರ್ಕಾರ ರೂ.1,064 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ನೀಡಿರುವ ಮಾಹಿತಿಯಂತೆ, ರಾಜ್ಯ ಸರ್ಕಾರ ಸಾಲಮನ್ನಾ ಕುರಿತಂತೆ ತೆಗೆದುಕೊಂಡಿರುವ ನಿರ್ಧಾರದಿಂದ 20 ಜಿಲ್ಲೆಗಳ 3,27,018 ರೈತರಿಗೆ ಲಾಭವಾಗಿದೆ. ಪ್ರಮುಖವಾಗಿ ಮಂಡ್ಯ ಜಿಲ್ಲೆಯ 28,296 ರೈತರಿಗೆ ಲಾಭವಾಗಿದೆ. ಕಲಬುರ್ಗಿಯಲ್ಲಿ 27,867 ರೈತರಿಗೆ ಅನುಕೂಲವಾಗಿದೆ. ಕೊಡಗು ಜಿಲ್ಲೆಯಲ್ಲಿ 510 ರೈತರಿಗೆ ಲಾಭವಾಗಿದೆ ಎಂದು ತಿಳಿದುಬಂದಿದೆ.