ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಮಥಾಯಿ, ‘2014ರ ನವೆಂಬರ್ ನಿಂದ 2016ರ ಏಪ್ರಿಲ್ವರೆಗೆ ನಾನು ಪಾಲಿಕೆಯ ಸಹಾಯಕ ಆಯುಕ್ತ (ಜಾಹೀರಾತು ವಿಭಾಗ) ಹುದ್ದೆಯನ್ನು ನಿಭಾಯಿಸಿದ್ದೆ. ಈ ಅವಧಿಯಲ್ಲಿ ನನ್ನ ವೇತನದಿಂದ ಪ್ರತಿ ತಿಂಗಳು ಜಿಪಿಎಫ್ ರೂಪದಲ್ಲಿ ರು. 15 ಸಾವಿರ ಕಡಿತ ಮಾಡಲಾಗಿತ್ತು. ಈ ಕುರಿತು ಇತ್ತೀಚೆಗೆ ಮಹಾಲೇಖಪಾಲರ ಕಚೇರಿಯಲ್ಲಿ ವಿಚಾರಿಸಿದರೆ, ‘ನಿಮ್ಮ ಖಾತೆಗೆ ಬಿಬಿಎಂಪಿಯಿಂದ ಯಾವುದೇ ಜಿಪಿಎಫ್ ಪಾವತಿಯಾಗಿಲ್ಲ’ ಎಂದು ಹೇಳಿದರು. ಜಿಪಿಎಫ್ ಪಾವತಿಸದಿರುವ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅವರು ಹಾರಿಕೆಯ ಉತ್ತರ ನೀಡುತ್ತಿದ್ದಾರೆ’ ಎಂದು ಮಥಾಯಿ ದೂರಿನಲ್ಲಿ ತಿಳಿ ಸಿದ್ದಾರೆ.