ನ್ಯಾಯಗ್ರಾಮದಲ್ಲಿರುವ ನಮ್ಮ ನಿವಾಸಕ್ಕೆ ತೆರಳುವ ಮಾರ್ಗ ಮಧ್ಯೆ ಹೆಬ್ಬಾಳ ಸಮೀಪ ಗಬ್ಬು ನಾರುತ್ತಿರುವುದು ನಮ್ಮ ಅನುಭವಕ್ಕೆ ಬಂದಿದೆ, ನಿಮ್ಮ ಕ್ರಮ ಸಾಂಪ್ರಾದಾಯಿಕವಾಗಿದ್ದು, ತೀರಾ ನಿಧಾನವಾಗಿದೆ, ನಗರದಲ್ಲಿ ಕಸದ ಸಮಸ್ಯೆ ಬಗೆಹರಿಸಲು ನೀವು ಯಾವುದೇ ಹೊಸ ತಂತ್ರಜ್ಞಾನ ಮತ್ತು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಹೇಳಿದೆ, ಕೂಡಲೇ ಉತ್ತಮ ಕ್ರಮ ಕೈಗೊಂಡು ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.