ಪ್ರತಿಭಟನೆ ಕುರಿತಂತೆ ಮಾತನಾಡಿರುವ ಐಎಂಎ ಕರ್ನಾಟಕ ಅಧ್ಯಕ್ಷ ಡಾ.ರಾಜಶೇಖರ್ ಅವರು, ಸಂಘದ ವತಿಯಿಂದ ಸಂಪೂರ್ಣ ಬಂದ್'ಗೆ ಕರೆ ನೀಡಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ಕ್ಲಿನಿಕ್ ಗಳು, ನರ್ಸಿಂಗ್ ಹೋಂಗಳು ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 8,000 ಆಸ್ಪತ್ರೆಗಳು ಬಂದ್'ಗೆ ಬೆಂಬಲವನ್ನು ಸೂಚಿಸಿದೆ. ಎಂದಿನಂತೆ ತುರ್ತು ಚಿಕಿತ್ಸಾ ಸೇವೆ, ಶಸ್ತ್ರಚಿಕಿತ್ಸೆಗಳು ಮುಂದುವರೆಯಲಿದೆ. ತುರ್ತು ಸೇವೆಗಳನ್ನು ಸರ್ಕಾರಿ ಆಸ್ಪತ್ರೆಗಳು ನೋಡಿಕೊಳ್ಳುತ್ತಿದ್ದು, ರೋಗಿಗಳ ಶಸ್ತ್ರಚಿಕಿತ್ಸಾ ದಿನವನ್ನು ಮುಂದೂಡಲಾಗಿದೆ ಎಂದು ಹೇಳಿದ್ದಾರೆ.