ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಥೆ ಬರೆಯಲು ಸಹಾಯವಾಗಲು ಮಕ್ಕಳಿಗೆ ಕಾರ್ಯಾಗಾರ

ನಗರದ ಮಕ್ಕಳು ವಾರ್ಷಿಕ ಮಕ್ಕಳ ಬರಹಗಾರರ ಉತ್ಸವಕ್ಕೆ ಸಿದ್ಧವಾಗಬಹುದು. 200ಕ್ಕೂ ...
ಬೆಂಗಳೂರು: ನಗರದ ಮಕ್ಕಳು ವಾರ್ಷಿಕ ಮಕ್ಕಳ ಬರಹಗಾರರ ಉತ್ಸವಕ್ಕೆ ಸಿದ್ಧವಾಗಬಹುದು. 200ಕ್ಕೂ ಹೆಚ್ಚು ಮಕ್ಕಳಿಗೆ ಆರು ಪ್ರಮುಖ ಪ್ರಶಸ್ತಿ ಪುರಸ್ಕೃತ ಬರಹಗಾರರು, ಚಿತ್ರಗಾರರು ಮತ್ತು ಥಿಯೇಟರ್ ವೃತ್ತಿಗಾರರು ತರಬೇತಿ ನೀಡಲಿದ್ದಾರೆ.
ಸಾಮಾನ್ಯ ಮತ್ತು ಪ್ರಾಪಂಚಿಕ ಘಟನೆಗಳಿಂದ ಹೆಕ್ಕಿ ತೆಗೆದು ಕಥೆ ತಯಾರು ಮಾಡುವ ರೀತಿ, ಕಥೆಯಲ್ಲಿನ ಕ್ರಿಯಾಶೀಲ ಅಂಶಗಳು, ಅದರಲ್ಲಿನ ಬರಹ, ಚಿತ್ರಗಳು, ಧ್ವನಿ ಮತ್ತು ಚಿತ್ರಗಳು ಕೂಡ ಮುಖ್ಯವಾಗುತ್ತದೆ. ಖ್ಯಾತ ಬರಹಗಾರರಾದ ವಿಕ್ರಮ್ ಶ್ರೀಧರ್, ಶರೂನ್ ಸುನ್ನಿ, ಸೌರಭ ರಾವ್, ನಿಶಾ ಅಬ್ದುಲ್ಲಾ, ಅಂದಲೀಬ್ ವಾಜಿದ್, ಲಾವಣ್ಯ ಪ್ರಸಾದ್ ಮಕ್ಕಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಮಕ್ಕಳ ಕಥೆ ಬರೆಯುವ ಉತ್ಸವ ಸರ್ಜಾಪುರ ರಸ್ತೆಯ ಜಿಇಎಆರ್ ಫೌಂಡೇಶನ್ ನಲ್ಲಿ ಇದೇ 18 ಮತ್ತು 19ರಂದು ಬೆಳಗ್ಗೆ 8 ಗಂಟೆಯಿಂದ ಅಪರಾಹ್ನ 2.30ರವರೆಗೆ ನಡೆಯಲಿದೆ.

Related Stories

No stories found.

Advertisement

X
Kannada Prabha
www.kannadaprabha.com