ಬಳಿಕ ಶ್ರೀಕೃಷ್ಣ ಮಠ ಭೇಟಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಮತ್ತು ನನ್ನ ಕುಟುಂಬ ವರ್ಗದವರು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೇವೆ. ನಮ್ಮ ಪೂರ್ವಜರ ನಾಲ್ಕು ತಲೆಮಾರುಗಳು ಉಡುಪಿಯ ಶ್ರೀಕೃಷ್ಣ ಮಠದೊಂದಿಗೆ ಸಂಪರ್ಕವನ್ನುಹೊಂದಿದೆ. ದೇಗುಲಕ್ಕೆ ಭೇಟಿ ನೀಡಿರುವುದು ಬಹಳ ಸಂತಸವನ್ನು ತಂದಿದೆ. ದೇಗುಲಕ್ಕೆ ನನ್ನೊಂದಿಗೆ ನನ್ನ ಪುತ್ರ ದುಶ್ಯಂತ್ ಸಿಂಗ್ ಕೂಡ ಬಂದಿದ್ದಾನೆಂದು ಹೇಳಿದ್ದಾರೆ.