ವಿಧಾನಸಭೆಯಲ್ಲಿ ಗುರುವಾಯ ನಿಯಮ 69ರ ಅಡಿಯಲ್ಲಿ ಮಹದಾಯಿ, ಕಳಸಾ-ಬಂಡೂರಿ ಸೇರಿದಂತೆ ಉತ್ತರ ಕರ್ನಾಟಕ ಇತರೆ ವಿಚಾರಗಳ ಕುರಿತು ವಿಶೇಷ ಚರ್ಚೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಹೈದರಾಬಾದ್ ಕರ್ನಾಟಕಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸಾಕಷ್ಟು ಸೀಟುಗಳನ್ನು ಮೀಸಲಿಡಲಾಗಿದೆ. ಕಳೆದ ಬಾರಿ 2,719 ಸೀಟುಗಳನ್ನುನೀಡಲಾಗಿತ್ತು. ಈ ಬಾರಿ ಇದರ ಸಂಖ್ಯೆಯನ್ನು 3,179ಕ್ಕೆ ಹೆಚ್ಚಿಸಲಾಗಿದೆ. 2,840.ರಷ್ಟಿದ್ದ ಇಂಜಿನಿಯರಿಂಗ್ ಸೀಟುಗಳನ್ನು 6,320ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.