ಇದೇ ವೇಳೆ ಬಿಜೆಪಿ ನಾಯಕ ರಾಮಚಂದ್ರ ಗೌಡ ಅವರು ಕೆಪಿಎಂಇ ಕಾಯ್ದೆಯನ್ನು ಹಲ್ಲಿಲ್ಲದ ಹಾವು ಎಂದಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ವಿಧೇಯಕವನ್ನು ಕೆಲವರು ಹಲ್ಲಿಲ್ಲದ ಹಾವು ಎಂದು ಹೋಲಿಸಿದ್ದಾರೆ. ಇದು ಹಾವಲ್ಲ. ತಪ್ಪು ಮಾಡಿದವರಿಗೆ ಕಟ್ಟಿ ಹಾಕುವ ಚಿಕ್ಕ ಹಗ್ಗ ಅಷ್ಟೇ. ಖಾಸಗಿ ವೈದ್ಯಕೀಯ ಸಂಸ್ಥೆಗಳ ದೌರ್ಜನ್ಯ, ಅಮಾನವೀಯ ನಡವಳಿಕೆಯನ್ನು ಕಟ್ಟಿ ಹಾಕಲು ಕಾಯ್ದೆಯನ್ನು ತಂದಿದ್ದೇವೆಯೇ ಹೊರತು ವೈದ್ಯರನ್ನು ಶಿಕ್ಷಿಸುವ ಸಲುವಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.