ಜೈಲಿನಲ್ಲಿ ಅಸಹಜವಾಗಿ ಸಾವನ್ನಪ್ಪಿದ ಕೈದಿಗಳ ಲೆಕ್ಕ ನೀಡಿ: ಸರ್ಕಾರಕ್ಕೆ ಹೈಕೋರ್ಟ್

ರಾಜ್ಯದ ಜೈಲುಗಳಲ್ಲಿ ಸಂಭವಿಸಿದ ವಿಚಾರಣಾಧೀನ ಕೈದಿಗಳು ಹಾಗೂ ಸಜಾ ಬಂಧಿಗಳ ಅಸಹಜ ಸಾವು ಪ್ರಕರಣಗಳ ಅಂಕಿ-ಅಂಶ ಕಲೆ ಹಾಕಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ಸೂಚನೆ ನೀಡಿದೆ...
ಹೈಕೋರ್ಟ್
ಹೈಕೋರ್ಟ್
ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಸಂಭವಿಸಿದ ವಿಚಾರಣಾಧೀನ ಕೈದಿಗಳು ಹಾಗೂ ಸಜಾ ಬಂಧಿಗಳ ಅಸಹಜ ಸಾವು ಪ್ರಕರಣಗಳ ಅಂಕಿ-ಅಂಶ ಕಲೆ ಹಾಕಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ಸೂಚನೆ ನೀಡಿದೆ. 
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯದ ಕಾರಾಗೃಹಗಳ ವ್ಯವಸ್ಥೆ ಸುಧಾರಣೆ ಮತ್ತು ಕೈದಿಗಳ ಅಸಹಜ ಸಾವು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆಯುವ ದೃಷ್ಟಿಯಿಂದ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಈ ಹಿಂದೆ ದಾಖಲಿಸಿಕೊಂಡಿತ್ತು. 
ಇದರಂತೆ ನಿನ್ನೆ ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, 2012ರಿಂದ ಈ ವರೆಗೂ ರಾಜ್ಯದ ಯಾವ ಯಾವ ಕಾರಾಗೃಹದಲ್ಲಿ ಎಷ್ಟು ವಿಚಾರಣಾಧೀನ ಹಾಗೂ ಸಜಾ ಬಂಧಿಗಳ ಅಸಹಜ ಸಾವು ಸೇಭವಿಸಿದೆ ಎಂಬುದರ ಕುರಿತು ಅಂಕಿ-ಅಂಶಗಳ ಕಲೆಹಾಕಿ ವರದಿ ಸಲ್ಲಿರುವಂತೆ ಅಮಿಕಸ್ ಕ್ಯೂರಿಯಾಗಿರುವ (ಕೋರ್ಟ್ ಸಹಾಯಕ) ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಅಲ್ಲದೆ. ಮುಂದಿನ ವಿಚಾರಣೆಯನನು ಜ.10ಕ್ಕೆ ಮುಂದೂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com