ನಿನ್ನೆ ಬೆಳಗ್ಗೆ 7 ಗಂಟೆ ಸುಮಾರಿಗೆ ಗುಂಜಾಲ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಸ್ತೆಯ ಪಕ್ಕದಲ್ಲಿದ್ದ 6 ಅಡಿ ಆಳದ ಗುಂಡಿಗೆ ಬಿದ್ದರು. ಹುಬ್ಬಳ್ಳಿಯ ತಡಿಪತ್ರಿ ಓಣಿಯಲ್ಲಿ ನೀರು ಸೋರಿಕೆಗೆ ಗುಂಡಿ ತೋಡಲಾಗಿತ್ತು. ರಸ್ತೆಯ ಎರಡೂ ಕಡೆಯಿಂದ ಗುಂಡಿ ಮುಕ್ತವಾಗಿದ್ದು ಒಂದು ಬದಿ ಮಾತ್ರ ತಡೆ ಹಾಕಲಾಗಿತ್ತು. ಅಲ್ಲಿ ಗುಂಡಿಯಿರುವುದು ಗುಂಜಾಲ್ ಅವರಿಗೆ ಗೊತ್ತಾಗದೆ ಬಿದ್ದರು. ಮೊನ್ನೆ ಸಂಜೆಯಷ್ಟೇ ಗುಂಡಿಯನ್ನು ತೋಡಲಾಗಿತ್ತು.