ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ 13ನೇ ರಾಷ್ಟ್ರೀಯತವಾದಿಗಳ ಹತ್ಯೆ ಇದಾಗಿದ್ದು, ಜುಬೈರ್, ಬಿಜೆಪಿ ಉಲ್ಲಾಳ ಮಂಡಲ್ ಕಮಿಟಿಯ ಸದಸ್ಯರಾಗಿದ್ದಾರೆ. ಜುಬೈರ್ ಕೊಲೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಡ್ರಗ್ ಮಾಫಿಯಾದಿಂದ ಇಂತಹ ಕೊಲೆ ಪ್ರಕರಣಗಳು ನಡೆಯುತ್ತಿವೆ ಎಂಬ ಅನುಮಾನ ಮೂಡಿದೆ ಎಂದು ಬಿಜೆಪಿ ಮುಖಂಡ ಜಿ. ಮಧು ಸೂಧನ್ ಮತ್ತಪ ಅನ್ವರ್ ಮನಪ್ಪಾಡಿ ದೂರಿದ್ದಾರೆ.