ಮೆಟ್ರೋ ಕಾಮಗಾರಿ ಆರಂಭವಾದಾಗಿನಿಂದ ಸಮಸ್ಯೆ ಮತ್ತಷ್ಟು ಹೆಚ್ಚಿದೆ, ಮೋಡ ಕಟ್ಟಿದ ವಾತಾವರಣವಿದ್ದರೇ ದ್ವಿಚಕ್ರ ವಾಹನ ಸವಾರರಿಗೆ ಸಂಚಾರ ಮಾಡುವುದು ದುಸ್ತರವಾಗುತ್ತಿದೆ. ವಾತಾವರಣದ ದೂಳಿಗೆ ರಸ್ತೆಗಳು ಸರಿಯಾಗಿ ಕಾಣುವುದಿಲ್ಲ, ಮಳೆ ಬಂದ ವೇಳೆ ಗುಂಡಿಗಳಲ್ಲಿ ನೀರು ತುಂಬಿಕೊಂರುತ್ತದೆ, ರಸ್ತೆ ಹೇಗಿದೆ ಎಂಬುದನ್ನು ಸವಾರರು ಕಲ್ಪಿಸಿಕೊಳ್ಳಲಪ ಸಾಧ್ಯವಾಗುವುದಿಲ್ಲ, ಸಿಮೆಂಟ್ ಮತ್ತು ಅವಶೇಷಗಳಿಂದ ಅವೈಜ್ಞಾನಿಕವಾಗಿ ಗುಂಡಿಗಳನ್ನು ಮುಚ್ಚಿರುವುದು ರಸ್ತೆಯನ್ನು ಮತ್ತಷ್ಟು ಹಾಳು ಮಾಡಿದೆ.