ಪ್ರತಿಭಟನೆ ನಡೆಸುತ್ತಿರುವ ವೇದಿಕೆ ಬಳಿ ಖಾಸಗಿ ಚಾನೆಲ್ ವೊಂದಕ್ಕೆ ಮಾತನಾಡಿದ ಪ್ರಕಾಶ್ ರೈ, ಬುಡಕಟ್ಟು ಜನಾಂಗದವರು, ಬಡವರು, ಅರಣ್ಯದಲ್ಲಿ ಬದುಕುವವರು ತಯಾರಿಸಿದ ವಸ್ತುಗಳಿಗೆ ಸರಕು ಮತ್ತು ಸೇವಾ ತೆರಿಗೆ ವಿಧಿಸುವುದು ನ್ಯಾಯವಲ್ಲ. ಜಿಎಸ್ ಟಿ ಬಹು ರಾಷ್ಟ್ರೀಯ ಕಂಪೆನಿಗಳಿಗೆ ಸಮವಾಗಿದೆ. ಇದರಿಂದ ಅವರ ಮೇಲೆ ಆರ್ಥಿಕ ಹೊರೆ ಹೊರಿಸಿದಂತಾಗುತ್ತದೆಯಲ್ಲದೆ ಸಾಮಾಜಿಕ ಚೌಕಟ್ಟಿಗೆ ಭಂಗ ತಂದಾಗುತ್ತದೆ ಎಂದರು.