ರೈತರಿಂದ ನೂರಾರು ಎಕರೆ ಭೂಮಿಯನ್ನು ಪಡೆದುಕೊಂಡಿರುವ ಕಂಪನಿಯವರು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಕಳೆದ ಐದು ವರ್ಷಗಳಿಂದಲೂ ಸ್ಥಳೀಯರಿಗೆ ಉದ್ಯೋಗಗಳನ್ನು ನೀಡಿಲ್ಲ. ಸ್ಥಳೀಯ ಯುವಕರಿಗೆ ಉದ್ಯೋಗ ದೊರಕಬಹುದು ಎಂದ ಆಶಯದೊಂದಿಗೆ ಪ್ರತಿ ಎಕರೆಗೆ 7-8 ಸಾವಿರ ದಂತೆ ಕಂಪನಿಗೆ ಒಟ್ಟು 2,000 ಎಕರೆ ಭೂಮಿಯನ್ನು ನೀಡಲಾಗಿದೆ. ಕಂಪನಿ ಸ್ಥಳೀಯರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಲಿಲ್ಲ ಎಂದಾದ ಮೇಲೆ ಭೂಮಿಯನ್ನು ನೀಡಿ ಏನು ಪ್ರಯೋಜನ?...
ಇದು ಕೇವಲ ಟಾಟಾ ಮೋಟರ್ಸ್ ಕಂಪನಿಯೊಂದರ ಸಮಸ್ಯೆಯಲ್ಲ. ಬಹುತೇಕ ಕಂಪನಿಗಳು ಇದೇ ರೂಢಿ ಅನುಸರಿಸಿಕೊಂಡು ಬರುತ್ತಿವೆ. ನೌಕರರನ್ನು ಕಾಯಂ ಮಾಡುತ್ತಿಲ್ಲ. ಕಂಪನಿ ಬೆಳವಮಿಗೆ ಜತೆಗೆ ಸುತ್ತಮುತ್ತಲಿನ ಯುವಕರಿಗೆ ಉದ್ಯೋಗಾವಕಾಶ ನೀಡಬೇಕು. ಸರ್ಕಾರವಾಗಲೀ ಅಥವಾ ನಾನಾಗಲೀ ಕಂಪನಿಗಳ ವಿರುದ್ಧವಿಲ್ಲ. ಆದರೆ, ಸ್ಥಳೀಯ ಯುವಕರ ಕುರಿತಂತೆ ಕಂಪನಿಗಳು ಹೊಂದಿರುವ ಧೋರಣೆಗಳು ಬದಲಾಗಬೇಕು. ಇಲ್ಲದೇ ಹೋದರೆ, ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.