ಕರ್ನಾಟಕ ರಾಜ್ಯೋತ್ಸವ: ಬಿಬಿಎಂಪಿ ಉದ್ಯಾನಗಳು ಸೇರಿ ನಗರದೆಲ್ಲೆಡೆ ಕನ್ನಡ ಧ್ವಜ ಹಾರಾಟ
ಕರ್ನಾಟಕ ರಾಜ್ಯೋತ್ಸವ: ಬಿಬಿಎಂಪಿ ಉದ್ಯಾನಗಳು ಸೇರಿ ನಗರದೆಲ್ಲೆಡೆ ಕನ್ನಡ ಧ್ವಜ ಹಾರಾಟ

ಕನ್ನಡ ರಾಜ್ಯೋತ್ಸವ: ಬಿಬಿಎಂಪಿ ಉದ್ಯಾನಗಳು ಸೇರಿ ನಗರದೆಲ್ಲೆಡೆ ಕನ್ನಡ ಧ್ವಜ ಹಾರಾಟ

ಬೆಂಗಳೂರಿನ ಎಲ್ಲಾ ಬಿಬಿಎಂಪಿ ಉದ್ಯಾನವನಗಳು, ಪಾಲಿಕೆ ಕಚೇರಿಗಳು ಮತ್ತು ನಗರದ ಉದ್ದಗಲಕ್ಕೂ ಇರುವ ಪ್ರಮುಖ ವೃತ್ತಗಳು ಮತ್ತು ಜಂಕ್ಷನ್ ಗಳಲ್ಲಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ........
Published on
ಬೆಂಗಳೂರು: ಬೆಂಗಳೂರಿನ ಎಲ್ಲಾ ಬಿಬಿಎಂಪಿ ಉದ್ಯಾನವನಗಳು, ಪಾಲಿಕೆ ಕಚೇರಿಗಳು ಮತ್ತು ನಗರದ ಉದ್ದಗಲಕ್ಕೂ ಇರುವ ಪ್ರಮುಖ ವೃತ್ತಗಳು ಮತ್ತು ಜಂಕ್ಷನ್ ಗಳಲ್ಲಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಬಿಬಿಎಂಪಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಿದೆ. ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಈ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಮೇಯರ್ ಸಂಪತ್ ರಾಜ್ ಅವರ ಸೂಚನೆಯ ಮೇರೆಗೆ ಈ ಸುತ್ತೋಲೆಯನ್ನು ನೀಡಲಾಗಿದೆ ಎಂದು ಬಿಬಿಎಂಪಿ ಪ್ರಧಾನ ಕಛೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಕಳೆದ ಜೂನ್ ನಲ್ಲಿ ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಬೇಡಿಕೆಯನ್ನು ಪರಿಶೀಲಿಸಲು 9 ಸದಸ್ಯರ ಸಮಿತಿಯನ್ನು ರಚಿಸುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಅವರು ಆದೇಶ ನೀಡಿದ್ದರು. ಸಮಿತಿ ಮುಖ್ಯ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಿಪಿಎಆರ್ ಕಾರ್ಯದರ್ಶಿ, ಕಾನೂನು ಇಲಾಖೆಯ ಕಾರ್ಯದರ್ಶಿ, ಕಾರ್ಯದರ್ಶಿ - ಗೃಹ ಅಧ್ಯಕ್ಷ- ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು, ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರುಗಳನ್ನು ಒಳಗೊಂಡಿದೆ. ಆದರೆ ಈ ಐದು ತಿಂಗಳಲ್ಲಿ ಸಮಿತಿ ಸದಸ್ಯರು ಒಮ್ಮೆ ಸಹ ಸಭೆ ನಡೆಸಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com