ವಚನಗಳು, ಕೆಲವು ಕೃತಿಗಳನ್ನು ಆಧರಿಸಿ ಮಂಟಪದ ಸ್ವರೂಪವನ್ನು ಕಲ್ಪಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ರೆವರೆಂಡ್ ಉತ್ತಂಗಿ ಚನ್ನಪ್ಪನವರ ‘ಅನುಭವ ಮಂಟಪದ ಐತಿಹಾಸಿಕತೆ’,ಎಸ್.ಎಂ. ಜಾಮದಾರ ಅವರ ‘ಅನುಭವ ಮಂಟಪದ ನವನಿರ್ಮಾಣ ಕುರಿತ ಟಿಪ್ಪಣಿ’, ವಚನ ಸಾಹಿತ್ಯ ಸಂಪುಟಗಳು, ಶರಣರ ಪುರಾಣಗಳಲ್ಲಿರುವ ಮಾಹಿತಿಗಳನ್ನು ಪರಿಗಣಿಸಿ, ಯಾವುದೇ ಅನುಕರಣೆಯಿಲ್ಲದಂತೆ ಮಂಟಪ ನಿರ್ಮಿಸುವ ರೂಪುರೇಷೆಯನ್ನು ಸಮಿತಿ ಸಿದ್ಧಪಡಿಸಿದೆ.