ಐಟಿ ಇಲಾಖೆ ಅಧಿಕಾರಿಗಳಿಗೆ ಲಂಚ ಕೊಡಲು ಯತ್ನಿಸಿದ ಐವರ ಬಂಧನ

ವಿವಿಧ ನಗರಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡಲು ಯತ್ನಿಸಿದ ವಕೀಲರು, ಚಾರ್ಟೆಡ್ ಅಕೌಂಟೆಂಟ್ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ವಿವಿಧ ನಗರಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡಲು ಯತ್ನಿಸಿದ ವಕೀಲರು, ಚಾರ್ಟೆಡ್ ಅಕೌಂಟೆಂಟ್ ಸೇರಿದಂತೆ ದೆಹಲಿಯ ಐವರನ್ನು ಕೇಂದ್ರ ತನಿಖಾ ದಳದ ಬೆಂಗಳೂರು ವಿಭಾಗ ಇತ್ತೀಚೆಗೆ ಬಂಧಿಸಿದೆ. ಐಟಿ ಇಲಾಖೆ ಮುಂದೆ ಉಳಿದುಕೊಂಡಿದ್ದ ಪಾನ್ ಮಸಾಲಾ ಕಂಪೆನಿಗೆ ಸಂಬಂಧಿಸಿದ ಕೇಸುಗಳ ವಿಚಾರಣೆಯನ್ನು ಇತ್ಯರ್ಥಪಡಿಸುವುದಾಗಿದೆ.
ಕಳೆದ ಆಗಸ್ಟ್ 30ರಂದು ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಎಫ್ಐಆರ್ ನಲ್ಲಿ ವಕೀಲ ಸತೀಶ್ ಚಂದ್ ಶರ್ಮ, ಚಾರ್ಟೆಡ್ ಅಕೌಂಟೆಂಟ್ ಕೃಷ್ಣ ಚೌರಾಸಿಯಾ, ಉದ್ಯಮಿ ವಿನೋದ್ ಕುಮಾರ್ ಬಂಕ, ಸಂಜಯ್ ಕೊಹ್ಲಿ ಮತ್ತು ಅಭಿಷೇಕ್ ಅವರ ಹೆಸರುಗಳಿವೆ.
ಸಿಬಿಐ ಸಂಗ್ರಹಿಸಿದ ವಿಷಯಗಳಲ್ಲಿ ಆರೋಪಿ ಶರ್ಮಗೆ ಐಟಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕವಿತ್ತು. ಚೌರಾಸಿಯಾ ಶಾಂತಿ ಪಾನ್ ಮಸಾಲಾ ಪ್ರೈ.ಲಿಮಿಟೆಡ್ ನ ವ್ಯವಸ್ಥಾಪಕರಾಗಿದ್ದು ಐಟಿ ಇಲಾಖೆಯ ಮುಂದೆ ಕೆಲವು ಕೇಸುಗಳು ದಾಖಲಾಗಿದ್ದವು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com