ವಿಚಾರವಾದಿಗಳ ವೇದಿಕೆ ಕರ್ನಾಟಕ ವತಿಯಿಂದ ನಗರದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ 'ಪೆರಿಯಾರ್ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಮಾತನಾಡಿರುವ ಅವರು, ಹಂತಕರ ಹಿಟ್ ಲಿಸ್ಟ್ ನಲ್ಲಿ ಐವರು ಪ್ರಮುಖ ವ್ಯಕ್ತಿಗಳಿದ್ದು, ಇದರಲ್ಲಿ ಈಗಾಗಲೇ ಗೌರಿ ಲಂಕೇಶ್ ಹಾಗೂ ಎಂಎಂ ಕಲಬುರ್ಗಿಯವರನ್ನು ಹತ್ಯೆ ಮಾಡಲಾಗಿದೆ. ಮುಂದಿನ ನಾನಾಗಿರಬಹುದು ಇಲ್ಲದೇ ಹೋದರೆ, ಕೆ.ಎಸ್ ಭಗವಾನ್ ಅವರಾಗಿರಬಹುದು ಎಂದು ಹೇಳಿದ್ದಾರೆ.