ಸತತ ಮೂರು ವರ್ಷಗಳ ಬರಗಾಲ ನಂತರ ಈ ವರ್ಷ ಮಳೆಯಾಗಿರುವುದು ಈ ಜಿಲ್ಲೆಗಳ ಜನರಲ್ಲಿ ದಸರಾ ಆಚರಣೆಗೆ ಸ್ವಲ್ಪ ಹರ್ಷವನ್ನುಂಟುಮಾಡಿದರೂ ಕೂಡ ಕರ್ನಾಟಕ, ತಮಿಳು ನಾಡು, ಕೇರಳ ಮತ್ತು ಪುದುಚೆರಿ ರಾಜ್ಯ ಸರ್ಕಾರಗಳಿಗೆ ಕಾವೇರಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಲಿಖಿತ ಅಫಿಡವಿಟ್ಟನ್ನು ಅಕ್ಟೋಬರ್ 24ರೊಳಗೆ ಸಲ್ಲಿಸುವಂತೆ ಹೇಳಿರುವುದು ಆತಂಕ ಮತ್ತು ಆಘಾತವನ್ನುಂಟುಮಾಡಿದೆ.