ಎಸ್ ಯುವಿ ಕಾರ್ ಅಪಘಾತ: ಆದಿಕೇಶವಲು ಮೊಮ್ಮಗ ಆಸ್ಪತ್ರೆಯಿಂದ ಪರಾರಿ

ಬುಧವಾರ ರಾತ್ರಿ ಪಾನಮತ್ತನಾಗಿ ಕಾರು ಚಾಲನೆ ಮಾಡಿ ಅಪಘಾತ ನಡೆಸಿದ್ದ ಉದ್ಯಮಿ ಆದಿಕೇಶವಲು ಮೊಮ್ಮಗ ವಿಷ್ಣು ಇಂದು ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಅಪಘಾತ: ಆದಿಕೇಶವಲು ಮೊಮ್ಮಗ ಆಸ್ಪತ್ರೆಯಿಂದ ಪರಾರಿ
ಅಪಘಾತ: ಆದಿಕೇಶವಲು ಮೊಮ್ಮಗ ಆಸ್ಪತ್ರೆಯಿಂದ ಪರಾರಿ
Updated on
ಬೆಂಗಳೂರು: ಬುಧವಾರ ರಾತ್ರಿ ಪಾನಮತ್ತನಾಗಿ ಕಾರು ಚಾಲನೆ ಮಾಡಿ ಅಪಘಾತ ನಡೆಸಿದ್ದ ಉದ್ಯಮಿ ಆದಿಕೇಶವಲು ಮೊಮ್ಮಗ ವಿಷ್ಣು ಇಂದು ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಇಂದು ಬೆಳೆಗ್ಗೆಾರು ಗಂಟೆಗೆ ನಗರದ ಮಲ್ಯ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಆಸ್ಪತ್ರೆಯ ತುರ್ತು ನಿರ್ಗಮನ ದ್ವಾರದಿಂದ ನೆಲಮಹಡಿಗಿಳಿದ ವಿಷ್ಣು ಅಲ್ಲಿಂದ ಅವರ ತಂದೆ ಶ್ರೀನಿವಾಸ್ ಅವರೊಡನೆ ಕಾರ್ ನಲ್ಲಿ ಪರಾರಿ ಆಗಿದ್ದಾನೆ.
ಪೋಲೀಸರ ವಶದಲ್ಲಿದ್ದ ವಿಷ್ಣು ಪರಾರಿಯಾಗಿದ್ದು ಪೋಲೀಸರು ವಿಷ್ಣುವಿನ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿದ್ದಾರೆ.
ಪೋಲೀಸರು ಒಂದು ತಂಡ ವಿಷ್ಣು ನಿವಾಸದಲ್ಲಿ ಶೋಧ ನಡೆಸಿದ್ದು, ಇನ್ನೊಂದು ತಂಡ ವೈಟ್ ಫೀಲ್ಡ್ ನ ವೈದೇಹಿ ಆಸ್ಪತ್ರೆಯಲ್ಲಿ ಶೋಧ ಕಾರ್ಯಾಚಣೆಯಲ್ಲಿ ತೊಡಗಿದೆ. ಮೂರನೇ ತಂಡ ವಿಷ್ಣು ಸಂಬಂಧಿಕರು, ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದೆ ಎಂದು ಮಾದ್ಯಮ ವರದಿ ಯಿಂದ ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com