ಘೋಷಣೆ ಕೂಗುವುದರ ಮೂಲಕ ನನ್ನ ಧೈರ್ಯ ಕುಂದಿಸಲಾರಿರಿ: ಪ್ರಕಾಶ್ ರೈ

ನನ್ನ ವಿರುದ್ಧ ಘೋಷಣೆ ಕೂಗುವುದರ ಮೂಲಕ ನೀವು ನನ್ನನ್ನು ಧೈರ್ಯಗೆಡಿಸಲಾರಿರಿ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ...
ಪ್ರಕಾಶ್
ಪ್ರಕಾಶ್
ಕಲಬುರಗಿ: ನನ್ನ ವಿರುದ್ಧ ಘೋಷಣೆ ಕೂಗುವುದರ ಮೂಲಕ ನೀವು ನನ್ನನ್ನು ಧೈರ್ಯಗೆಡಿಸಲಾರಿರಿ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತವಾಡಿದ ಪ್ರಕಾಶ್ ರೈ ನಿಮ್ಮ ನಡವಳಿಕೆಯಿಂದ ನಾನು ಮತ್ತಷ್ಟು ಪ್ರಬಲನಾಗುತ್ತೇನೆ ಎಂದು ತಿಳಿಸಿದ್ದಾರೆ, ಕಲಬುರಗಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಪ್ರಕಾಶ್ ರೈ ಸಂಜೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು, ಹೆಲಿಕಾಪ್ಟರ್ ಇಂದ ಇಳಿದು ಬರುವಾಗ ಪ್ರಕಾಶ್ ರೈ ವಿರುದ್ಧ ಘೋಷಣೆ ಕೂಗಿ ಅವರಿ ಕಾರಿಗೆ ಮುತ್ತಿಗೆ ಹಾಕಲಾಯಿತು. ನಂತರ ಕಲಬುರಗಿಯಿಂದ ಪ್ರಕಾಶ್ ರೈ ಹೈದರಾಬಾದ್ ಗೆ ತೆರಳಿದರು.
ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರೈ  ಗುರುವಾರ ರಾತ್ರಿ ನಡೆದ ಘಟನೆ ಬಗ್ಗೆ ತಿಳಿಸಿದರು. ಕೆಲವರು ನನ್ನ ಕಾರಿಗೆ ಮುತ್ತಿಗೆ ಹಾಕಿ ನನ್ನ ವಿರುದ್ದ ಘೋಷಣೆ ಕೂಗಿದರು. ನನ್ನ ವಿರುದ್ಧ ಘೋಷಣೆ ಕೂಗುವಂತ ಕೆಲಸ ನಾನೇನು ಮಾಡಿದ್ದೀನಿ ಎಂದು ಅವರು ಪ್ರಶ್ನಿಸಿದ್ದಾರೆ.
ತಪ್ಪಿತಸ್ಥರನ್ನು ಸರ್ಕಾರ ರಕ್ಷಿಸುತ್ತಿರುವುದರ ಬಗ್ಗೆ ಪ್ರಶ್ನಿಸುವುದು ತಪ್ಪಾ, ಅವರು ಕೆಲವೇ ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಿದ್ದಾರೆ,  ದೌರ್ಜನ್ಯ  ಪ್ರಮಾಣ ಹೆಚ್ಚಾಗಿದೆ. ಪ್ರಶ್ನಿಸುವವರನ್ನು ಸುಮ್ಮನಾಗಿಸುತ್ತಿದ್ದಾರೆ, ಕರ್ನಾಟಕದ ಜನತೆಯನ್ನು ಎಲ್ಲಿಯವರೆಗೆ ಮೂರ್ಖರನ್ನಾಗಿಸಲು  ಅವರಿಂದ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com