ಸೇಲಂನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಗೋಪಾಲಕೃಷ್ಣ ಮತ್ತು ವೀರಪ್ಪನ್ ನಡುವೆ ದೊಡ್ಡ ಜಟಾಪಟಿಯೇ ನಡೆದಿತ್ತು.ಎಸ್ಪಿ ಗೋಪಾಲಕೃಷ್ಣ ಅವರನ್ನು ಕೊಲೆ ಮಾಡುವ ಪಣ ತೊಟ್ಟಿದ್ದ. ಇದರ ಭಾಗವಾಗಿ 1993ರಲ್ಲಿ ಪೊಲೀಸ್, ಅರಣ್ಯಾಧಿಕಾರಿಗಳು ಬರುತ್ತಿದ್ದ ಪಾಲಾರ್ ಸೇತುವೆಯನ್ನು ಸ್ಫೋಟಿಸಿ ಗುಂಡಿನ ಮಳೆ ಸುರಿಸಿದ್ದರು. ಪರಿಣಾಮವಾಗಿ 26 ಮಂದಿ ಸಾವಿಗೀಡಾಗಿ ಗೋಪಾಲಕೃಷ್ಣ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 43 ಮಂದಿ ಮಹಿಳೆಯರೂ ಸೇರಿ 176 ಮಂದಿಯನ್ನು ಬಂಧಿಸಲಾಗಿತ್ತು.