ಬೆಳಗಾವಿ/ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆ ತನಿಖೆ ನಡೆಸುತ್ತಿರುವ ವಿಶೇಷ ತನಿಕಾ ತಂಡ ಬೆಳಗಾವಿಯಲ್ಲಿ ಇನ್ನೋರ್ವ ಹಿಂದೂ ಪರ ಕಾರ್ಯಕರ್ತ ಭರತ್ ಕುರ್ವೆಯನ್ನು ಬಂಧಿಸಿದೆ. ಬೆಳಗಾವಿಯಲ್ಲಿರುವ ಸಂಭಾಜಿ ಗಲ್ಲಿಯ ನಿವಾಸಿ ಭರತ್ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.ಈತ ಕೊಲೆಯ ಯೋಜನೆ ರೂಪಿಸಿದ್ದನೆನ್ನಲಾದ ಅಮುಲ್ ಕಾಳೆ ಅವನೊಂದಿಗೆ ಸಂಪರ್ಕದಲ್ಲಿದ್ದರೆಂದು ಹೇಳಲಾಗಿದೆ.