ದಾವಣಗೆರೆ: ಸಚಿವ ಶಿವಶಂಕರ ರೆಡ್ಡಿ ಮೆಚ್ಚಿಸಲು ಕೆರೆ ತುಂಬಿಸಿದ ಅಧಿಕಾರಿಗಳು!

ಸಚಿವರಿಂದ ಶಹಬ್ಬಾಸ್ ಗಿರಿ ಪಡೆಯುವ ಸಲುವಾಗಿ ಅಧಿಕಾರಿಗಳು ಈಚಘಟ್ಟದ ಕೆರೆಯನ್ನು ಬೋರ್ ವೆಲ್ ನಿಂದ ತುಂಬಿಸಿದರು,...
ಶಿವಶಂಕರ ರೆಡ್ಡಿ
ಶಿವಶಂಕರ ರೆಡ್ಡಿ
Updated on
ದಾವಣಗೆರೆ:  ಕೃಷಿ ಸಚಿವ ಶಿವಶಂಕರ ರೆಡ್ಡಿ  ಸೋಮವಾರ ಜಿಲ್ಲೆಗೆ ಭೇಟಿ ನೀಡಿದ್ದರು, ಮಧ್ಯಾಹ್ನ 2.30ಕ್ಕೆ  ಸಚಿವರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಬೇಕಿತ್ತು.
ಆದರೆ ಸಮಯಕ್ಕೆ ಸರಿಯಾಗಿ ಬಾರದ ಸಚಿವರು 4 ಗಂಟೆಗೆ ಬಂದರು, ಹೀಗಾಗಿ ದಿನಪೂರ್ತಿ ಕಾರ್ಯಕ್ರಮ ಸರಿಹೋಗಲಿಲ್ಲ, 
ಸಚಿವರಿಂದ ಶಹಬ್ಬಾಸ್ ಗಿರಿ ಪಡೆಯುವ ಸಲುವಾಗಿ ಅಧಿಕಾರಿಗಳು ಈಚಘಟ್ಟದ ಕೆರೆಯನ್ನು ಬೋರ್ ವೆಲ್ ನಿಂದ ತುಂಬಿಸಿದರು, ಆದರೆ  ಸಚಿವರು ತಡವಾಗಿ ಬಂದದ್ದು, ಅವರಿಗೆ ನಿರಾಸೆ ಉಂಟು ಮಾಡಿತ್ತು,
ಬೆಳಗ್ಗೆಯೇ  ಬಂದಿದ್ದ ಇಲಾಖೆ ಅಧಿಕಾರಿಗಳು ಕೆರೆಗೆ ಕೊಳವೆ ಬಾವಿ ಮೂಲಕ ನೀರು ತುಂಬಿಸಿದರು ಅಂತರ್ಜಲ ಸಂರಕ್ಷಣೆಗಾಗಿ ಕೃಷಿಹೊಂಡ ತೆರೆಯುವಂತೆ ಸರ್ಕಾರ ಹೇಳಿದ್ದರೂ ಆ ಕೆಲಸವನ್ನು ಯಾರೂ ಮಾಡಲಿಲ್ಲ, ಕೊನೆಗೆ ಸಚಿವ ರೆಡ್ಡಿ ಇದೇ ನೀರಿಗೆ ಪೂಜೆ ಸಲ್ಲಿಸಿ ತೆರಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com