ಎನ್'ಡಿಆರ್'ಎಫ್, ಭಾರತೀಯ ಸೇನೆ, ನಾಗರೀಕ ಭದ್ರತಾ ಪಡೆ, ಎಸ್'ಡಿಆರ್'ಎಫ್, ಸ್ಥಳೀಯ ಪೊಲೀಸರ ತಂಡ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈವರೆಗೂ ಮುಕ್ಕೊಡ್ಲು ಪ್ರದೇಶದ 60 ಗ್ರಾಮಸ್ಥರನ್ನು ರಕ್ಷಣೆ ಮಾಡಿದ್ದಾರೆ. ಎಮ್ಮೆಥಾಡು ಗ್ರಾಮದಲ್ಲಿ 300 ಎಕರೆ ಭೂಮು ಸಂಪೂರ್ಣವಾಗಿ ನಾಶಗೊಂಡಿದೆ. ಆದರೆ, ಗ್ರಾಮಸ್ಥರನ್ನು ರಕ್ಷಣೆ ಮಾಡಿ ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.