ಮುಕ್ಕೊಡ್ಲು ಗ್ರಾಮದ ಚೆನ್ನಿಪೆಟ್ಟೀರಾ ಮಾದಪ್ಪ ಅವರ ಕುಟುಂಬ ಪ್ರವಾಹಕ್ಕೆ ಸಿಲುಕಿತ್ತು. ಈ ಕುಟುಂಬದಲ್ಲಿ ಅಂಗವಿಕಲ ವ್ಯಕ್ತಿಯೊಬ್ಬರು ಇದ್ದರು, ಅಡುಗೆ ಮಾಡಲು ಧವಸಧಾನ್ಯಗಳಿರಲಿಲ್ಲ, ಹೀಗಾಗಿ ಈ ಕುಟುಂಬ ಬದುಕುವ ಎಲ್ಲಾ ಭರವಸೆಗಳನ್ನು ಕಳೆದು ಕೊಂಡಿತ್ತು, ಇಲ್ಲಿನ ಸ್ಥಳೀಯ ರಕ್ಷಣಾ ತಂಡದ 10 ಯುವಕರು ಕುಟುಂಬವನ್ನು ಸುರಕ್ಷಿತಕವಾಗಿ ನಿರಾಶ್ರಿತರ ಶಿಬಿರಕ್ಕೆ ತಲುಪಿಸಿದೆ,.ಕಳೆದ 5 ದಿನಗಳಿಂದ ಏನೂ ತಿನ್ನದೆ ಉಪವಾಸ ಇದ್ದೆವು, ನಾವು ಮತ್ತೆ ಹೊರ ಜಗತ್ತು ನೋಡುತ್ತೇವೆ ಎಂಬ ಭರವಸೆಯೇ ಇರಲಿಲ್ಲ ಎಂದು ಕುಟುಂಬದ ಚೊಂಡಮ್ಮ ಹೇಳಿದ್ದಾರೆ.