ಕೊಡಗು ಪ್ರವಾಹ ಸಂತ್ರಸ್ತರಿಗೆ ಉಚಿತ ಹೇರ್ ಕಟ್ಟಿಂಗ್ , ಶೇವ್
ತ್ತೀಚಿಗೆ ಮಹಾಮಳೆ ಹಾಗೂ ಭೂ ಕುಸಿತದಿಂದ ಸಂತ್ರಸ್ತರಾಗಿರುವ ಕೊಡಗಿನ ಜನತೆಗೆ ಭದ್ರಾವತಿಯಿಂದ ತೆರಳಿದ್ದ ಸವಿತಾ ಸಮಾಜದ ತಂಡವೊಂದು ಉಚಿತವಾಗಿ ಹೇರ್ ಕಟ್ಟಿಂಗ್ ಮತ್ತು ಶೇವ್ ಮಾಡಿ ಬಂದಿದೆ.
ಶಿವಮೊಗ್ಗ :ಇತ್ತೀಚಿಗೆ ಮಹಾಮಳೆ ಹಾಗೂ ಭೂ ಕುಸಿತದಿಂದ ಸಂತ್ರಸ್ತರಾಗಿರುವ ಕೊಡಗಿನ ಜನತೆಗೆ ಭದ್ರಾವತಿಯಿಂದ ತೆರಳಿದ್ದ ಸವಿತಾ ಸಮಾಜದ ತಂಡವೊಂದು ಉಚಿತವಾಗಿ ಹೇರ್ ಕಟ್ಟಿಂಗ್ ಮತ್ತು ಶೇವ್ ಮಾಡಿ ಬಂದಿದೆ.
ಪ್ರವಾಹದಿಂದ ಸಂತ್ರಸ್ತರಿಗೆ ಸೇವೆ ಮಾಡಲು ಶಿವಮೊಗ್ಗದಲ್ಲಿನ ಏಳು ಅಂಗಡಿಗಳ ಮಾಲೀಕರು ಗುರುವಾರ ತೆರಳಿದ್ದರು. ಶುಕ್ರವಾರ ಈ ತಂಡ ಮೂರು ಪರಿಹಾರ ಕೇಂದ್ರಗಳಲ್ಲಿ ಸುಮಾರು 300 ಜನರಿಗೆ ಯಾವುದೇ ಹಣ ಪಡೆಯದೆ ಸೇವೆ ಮಾಡಿ ಮತ್ತೆ ಶಿವಮೊಗ್ಗಕ್ಕೆ ಆಗಮಿಸಿದೆ.