ಮೈಸೂರು: ಫಲ ತಾಂಬೂಲ ನೀಡಿ ಮತ ಚಲಾಯಿಸಲು ಆಮಂತ್ರಣ

ಸಾಮಾನ್ಯವಾಗಿ ಮದುವೆಯಂತಹ ಶುಭ ಕಾರ್ಯಗಳಿಗೆ ಆಮಂತ್ರಣ ನೀಡಿ ಮನೆಗೆ ಹೋಗಿ ...
ಮೈಸೂರಿನಲ್ಲಿ ತಾಂಬೂಲದೊಂದಿಗೆ ಆಹ್ವಾನಿಸಿದ ಕಾರ್ಯಕರ್ತರು
ಮೈಸೂರಿನಲ್ಲಿ ತಾಂಬೂಲದೊಂದಿಗೆ ಆಹ್ವಾನಿಸಿದ ಕಾರ್ಯಕರ್ತರು

ಮೈಸೂರು: ಸಾಮಾನ್ಯವಾಗಿ ಮದುವೆಯಂತಹ ಶುಭ ಕಾರ್ಯಗಳಿಗೆ ಆಮಂತ್ರಣ ನೀಡಿ ಮನೆಗೆ ಹೋಗಿ ಆಮಂತ್ರಿಸುವುದು ಸಾಮಾನ್ಯ. ಆದರೆ ಕಳೆದ ವಿಧಾನಸಭೆ ಚುನಾವಣೆಯಂತೆ ಈ ಬಾರಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೂಡ ಕಾರ್ಯಕರ್ತರ ಗುಂಪೊಂದು ಮೈಸೂರಿನ ಅಗ್ರಹಾರ ಸಮೀಪ ನಟರಾಜ ಕಾಲೇಜು ಹತ್ತಿರ ಮನೆಗಳಿಗೆ ತೆರಳಿ ಆಹ್ವಾನ ನೀಡಿ ಮತಯಾಚಿಸಿದ್ದು ಕಂಡುಬಂತು.

ಮದುವೆ ಆಮಂತ್ರಣ ಪತ್ರಿಕೆಯಂತೆ ಆಹ್ವಾನ ಪತ್ರಿಕೆಯನ್ನು ವಿನ್ಯಾಸಗೊಳಿಸಲಾಗಿತ್ತು. ಅದರಲ್ಲಿ ಮತದಾರರನ್ನು ಮದುಮಗಳಾಗಿ ಮತ್ತು ಅಭ್ಯರ್ಥಿಯನ್ನು ಮದುಮಗನಾಗಿ ಚಿತ್ರಿಸಲಾಗಿತ್ತು. ಮತವನ್ನು ಮಂಗಳಸೂತ್ರವಾಗಿ ಮತ್ತು ಮತದಾನದ ದಿನಾಂಕವನ್ನು ಮುಹೂರ್ತ ಎಂದು ಬರೆಯಲಾಗಿತ್ತು.

ಕಾರ್ಯಕರ್ತರು ಮತದಾರರ ಮನೆಮನೆಗಳಿಗೆ ತೆರಳಿ ಆಹ್ವಾನ ನೀಡಿ ಫಲ ತಾಂಬೂಲಗಳನ್ನು ನೀಡಿ ಸಾಂಪ್ರದಾಯಿಕವಾಗಿ ಆಹ್ವಾನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com