ಬಿಜೆಪಿ ನಾಯಕರಾದ ವಿನೋದ್ ಕೃಷ್ಣಮೂರ್ತಿ, ಖ್ಯಾತ ವಕೀಲರಾದ ವಿವೇಕ್ ರೆಡ್ಡಿ ಸಂತೋಷ್ ತಮ್ಮಯ್ಯ ಅವರೊಂದಿಗೆ ತೆರಳಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಭದ್ರತೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಇದೇ ವೇಳೆ ಸಿಟಿ ರವಿ ಸಹ ಇದ್ದು, "ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ್ಗೆ ಕೆಲವರು ಜೀವ ಬೆದರಿಕೆ ಹಾಕುತ್ತಿದ್ದಾರೆ. ಒಬ್ಬ ಪತ್ರಕರ್ತನಿಗೇ ಹೀಗಾದ್ರೆ ಜನಸಾಮಾನ್ಯರ ಗತಿ ಏನು? ಕೂಡಲೇ ಸಂತೋಷ್ ತಮ್ಮಯ್ಯಗೆ ಸೂಕ್ತ ಭದ್ರತೆ ನೀಡ ಬೇಕು" ಎಂದು ಮನವಿ ಮಾಡಿದ್ದಾರೆ.