ಬೆಂಗಳೂರು: ಆಕಸ್ಮಿಕವಾಗಿ ಹೊಂಡಕ್ಕೆ ಬಿದ್ದ ತಮ್ಮ ಇಬ್ಬರು ಮಕ್ಕಳನ್ನು ರಕ್ಷಿಸಲು ಜಿಗಿದ ತಾಯಿ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಶನಿವಾರ ಹೊಸಕೋಟೆಯ ತಿರುಮಶೆಟ್ಟಿಹಳ್ಳಿ ನಡೆದಿದೆ.
ಸಾರಕ್ಕಿ ಗುಟ್ಟಹಳ್ಳಿ ನಿವಾಸಿಗಳಾದ ಲಕ್ಷ್ಮಿ, ಮೊನಿಷಾ (7) ಮೋಹಿತ್(6) ಮೃತ ದುರ್ದೈವಿಗಳು. ಪೆಟ್ಟನಹಳ್ಳಿ ಗೇಟ್ ಬಳಿ 2.30ರ ವೇಳೆ ಘಟನೆ ನಡೆದಿದೆ.
ತನ್ನ ಪತಿ ಶ್ರೀರಾಮ್ ಅವರನ್ನು ಭೇಟಿ ಮಾಡಲು ತಮ್ಮ ಮಕ್ಕಳಾದ ಮೋನಿಶಾ ಮತ್ತು ಮೋಹಿತ್ ಕರೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಬಿದ್ದರು, ಅವರನ್ನು ರಕ್ಷಿಸಲು ಜಿಗಿದ ಆಕೆಯು ಸಾವನ್ನಪ್ಪಿದ್ದಾಳೆ. 8 ವರ್ಷಗಳ ಹಿಂದೆ ಇಬ್ಬರು ಮದುವೆಯಾಗಿದ್ದರು.
ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ವದಂತಿಗಳ ಬಗ್ಗೆ ಸುಳ್ಳು ಎಂದು ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.