ಕಳೆದ ಅಕ್ಟೋಬರ್ 10ರಂದು ರಂಗಸ್ವಾಮಿ ಭತ್ತದ ಕೊಯ್ಲಿನ ಟ್ರಾಕ್ಟರ್ ಅನ್ನು ಹಡಗಲಿಗೆ ರಿಪೇರಿಗೆ ಬಿಟ್ಟು ದಾವಣಗೆರೆಯಿಂದ ತಮ್ಮ ಊರು ಕಕ್ಕರಗೊಳ್ಳಕ್ಕೆ ಹೋಗುತ್ತಿದ್ದ. ಹೊಂಡದ ಸರ್ಕಲ್ ಬಳಿ ಗ್ರಾಮಕ್ಕೆ ತೆರಳಲು ನಿಂತಿದ್ದ ರಂಜಿತಾಳನ್ನು ನೋಡಿ ಡ್ರಾಪ್ ಕೊಡುವುದಾಗಿ ಕರೆಯುತ್ತಾನೆ. ರಾತ್ರಿ 8 ಗಂಟೆ ಆಗಿದ್ದರಿಂದ ಮತ್ತು ರಂಜಿತಾಗೆ ಈತನ ಹೆಂಡತಿಯ ಪರಿಚಯವಿತ್ತು. ತನ್ನ ಪರಿಯಸ್ಥರ ಪತಿ ಎಂಬ ಒಂದೇ ಕಾರಣಕ್ಕೆ ರಂಜಿತಾ ಈತನ ಬೈಕ್ ಹತ್ತಿರುತ್ತಾಳೆ. ಬಳಿಕ ರಂಜಿತಾಳನ್ನು ಬೈಕ್ ಹತ್ತಿಸಿಕೊಂಡ ರಂಗಸ್ವಾಮಿ ಸ್ವಲ್ಪ ದೂರ ಕೊಂಡಜ್ಜಿ ರಸ್ತೆಯಲ್ಲಿ ಸಾಗುವಾಗ ಮಾರ್ಗ ಬದಲಿಸುತ್ತಾನೆ. ಏಕೆ ಮಾರ್ಗ ಬದಲಾವಣೆ ಎಂದು ರಂಜಿತಾ ಪ್ರಶ್ನಿಸಿದ್ದಕ್ಕೆ ಮುಂದೆ ಪೊಲೀಸರಿದ್ದಾರೆ, ಡಿಎಲ್, ಹೆಲ್ಮೆಟ್ ಎಂದೆಲ್ಲಾ ನೆವ ಹೇಳಿ ಇನ್ನೊಂದು ರಸ್ತೆಗೆ ಹೋಗುತ್ತಾನೆ. ನಿರ್ಜನ ಜಾಗದಲ್ಲಿ ಬೈಕ್ ನಿಲ್ಲಿಸಿ ಪೆಟ್ರೋಲ್ ಖಾಲಿ ಆಯ್ತು ಎಂದು ಸಬೂಬು ಹೇಳುತ್ತಾನೆ.