ಕಂಬಿಗಳ ನಡುವಿನಿಂದ ಕಾಲನ್ನು ಬಿಡಿಸಿಕೊಳ್ಳಲು ಆನೆಯು ಬಹಳಷ್ಟು ಕಷ್ಟ ಪಟ್ಟು, ಬಳಿಕ ಬಿಡಿಸಿಕೊಳ್ಳಲಾಗದೇ ನರಳಿ, ನರಳಿ ಸ್ಥಳದಲ್ಲೇ ಮೃತಪಟ್ಟಿದೆ. ಈ ಪ್ರದೇಶದಲ್ಲಿ ಊರಿನ ಜನರು ಹೆಚ್ಚಾಗಿ ಓಡಾಡುವುದಿಲ್ಲ. ಆದರಿಂದ ಆನೆಯು ಕಂಬಿಗಳ ನಡುವೆ ಸಿಲುಕಿದ್ದ ಸಂಗತಿ ಯಾರ ಗಮನಕ್ಕೂ ಬಂದಿರಲಿಲ್ಲ. ಈ ಘಟನೆ ನಡೆದ ಬಹಳ ಸಮಯದ ಬಳಿಕ ಅದೇ ದಾರಿಯಲ್ಲಿ ಹೋಗುತ್ತಿದ್ದ ಸ್ಥಳೀಯರೊಬ್ಬರು ಆನೆ ಮೃತಪಟ್ಟಿರುವುದನ್ನು ಕಂಡು ಅರಣ್ಯ ಇಲಾಖೆಯವರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಗ್ರಾಮಸ್ಥರ ಸಹಾಯದಿಂದ ಆನೆಯ ಮೃತದೇಹವನ್ನು ಕಂಬಿಗಳಿಂದ ಬಿಡಿಸಿದ್ದಾರೆ.