ಚಾಮರಾಜನಗರ: ಸುಳ್ವಾಡಿ ದೇವಾಲಯ ವಿಷ ಪ್ರಸಾದ ದುರಂತದ ನಂತರ, ಬೆಡಗಮಾಪನಾ ಕಲ್ಯಾಣ ಸಮಿತಿ, ಸಾಲೂರು ಮಠದಿಂದ ಇಮ್ಮಡಿ ಮಹದೇವಸ್ವಾಮಿಯನ್ನು ದೂರ ಇಡಲು ನಿರ್ಧಾರ ಮಾಡಿದೆ.
ಮಂಗಳವಾರ ನಡೆದ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಸಮಿತಿ ಸದಸ್ಯರು, ಮತ್ತೆ ಮಠಕ್ಕೆ ಕಳಂಕಿತ ಸ್ವಾಮೀಜಿ ಪ್ರವೇಶಿಸುವುದು ಬೇಡ ಎಂದು ಕೋರ್ಟ್ ನಲ್ಲಿ ವಿಚಾರಣೆ ನಡೆದು ಆತ ಮುಗ್ದ ಎಂದು ತೀರ್ಮಾನವಾದ ನಂತರವೇ ಅವರು ಮಠಕ್ಕೆ ಬರಲಿ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.