ಕೋಲಾರ: ಹಳಿ ತಪಾಸಣೆ ನಡೆಸುತ್ತಿದ್ದ ವೇಳೆ ರೈಲು ಹರಿದು ಇಬ್ಬರು ನೌಕರರ ದಾರುಣ ಸಾವು!

ರೈಲು ಡಿಕ್ಕಿಯಾಗಿ ರೈಲ್ವೆ ಟ್ರ್ಯಾಕ್ ಮ್ಯಾನ್ ಹಾಗೂ ಓರ್ವ ಗ್ಯಾಂಗ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆಯ;ಲ್ಲಿ ನಡೆದಿದೆ.
ಕೋಲಾರ: ರೈಲು ಡಿಕ್ಕಿಯಾಗಿ ಇಬ್ಬರು ನೌಕರರ ದುರ್ಮರಣ
ಕೋಲಾರ: ರೈಲು ಡಿಕ್ಕಿಯಾಗಿ ಇಬ್ಬರು ನೌಕರರ ದುರ್ಮರಣ
ಕೋಲಾರ: ರೈಲು ಡಿಕ್ಕಿಯಾಗಿ ರೈಲ್ವೆ ಟ್ರ್ಯಾಕ್ ಮ್ಯಾನ್ ಹಾಗೂ ಓರ್ವ ಗ್ಯಾಂಗ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ನಡೆದಿದೆ. 
ಬಂಗಾರಪೇಟೆಯ ವರದಾಪುರ ಬಳಿಯ ರೈಲ್ವೇ ಗೇಟ್ ಬಳಿ ನಡೆದ ಘಟನೆಯಲ್ಲಿ ರಾಜಸ್ಥಾನ ಮೂಲದ ಹರೀ ಸಿಂಗ್ ಮೀನಾ (30) ಹಾಗೂ ಕುಪ್ಪಂ ತಾಲೂಕಿನ ಬಂಡಪಲ್ಲಿ ಗ್ರಾಮದ ರಾಮಸ್ವಾಮಿ (28) ಸಾವಿಗೀಡಾದ ದುರ್ದೈವಿಗಳು.
ರೈಲ್ವೆ ಟ್ರ್ಯಾಕ್ ತಪಾಸಣೆ ನಡೆಸುತ್ತಿದ್ದ ವೇಳೆ ರೈಲು ಹರಿದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಕುರಿತು ಬಂಗಾರಪೇಟೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com