ನಾಡಿನ ಖ್ಯಾತ ಪತ್ರಕರ್ತ ದಿ.ವಡ್ಡರ್ಸೆ ರಘುರಾಮ ಶೆಟ್ಟಿಯವರ ಪುತ್ರರಾಗಿದ್ದ ಮಧುಕರ ಶೆಟ್ಟಿ ಅವರು, 1999ರಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. 2009ರಲ್ಲಿ ಲೋಕಾಯುಕ್ತ ಸಂಸ್ಥೆಯ ಎಸ್ಪಿಗೆ ಹುದ್ದೆಗೆ ಅವರನ್ನು ಸರ್ಕಾರ ನಿಯೋಜಿಸಿತು. ಅಲ್ಲಿ ಭ್ರಷ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾಲಿಗೆ ದುಃಸ್ವಪ್ನವಾಗಿದ್ದ ಅವರು, ಅಂದಿನ ಕೆಜಿಎಫ್'ನ ಶಾಸಕ ವೈ.ಸಂಪಂಗಿ ಹಾಗೂ ಕೋಲಾರ ಜಿ.ಪಂ.ಅಧ್ಯಕ್ಷ ಸೇರಿ ಹಲವು ಗಣ್ಯರ ವಿರುದ್ಧ ಅಕ್ರಮಗಳನ್ನು ಬಯಲಿಗೆಳೆದು ಖಡಕ್ ಅಧಿಕಾರಿ ಎನ್ನಿಸಿಕೊಂಡಿದ್ದರು.