ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಮೀಷನರ್ ಆಗಿ ಅನುರಾಗ್ ತಿವಾರಿ ಸೇವೆ ಸಲ್ಲಿಸುತ್ತಿದ್ದರು. ನಾಲ್ಕು ವಾರಗಳ ರಜೆ ಮೇರೆಗೆ ತಮ್ಮ ಊರಿಗೆ ತೆರಳಿದ್ದ ತಿವಾರಿ ನಿಗೂಢವಾಗಿ ಸಾವಿಗೀಡಾಗಿದ್ದರು. ತಮ್ಮ ಜನ್ಮದಿನದಂದೇ ಸಾವಿಗೆ ತುತ್ತಾಗಿದ್ದ ಐಎಎಸ್ ಅಧಿಕಾರಿಯ ಹತ್ಯೆ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು.