"ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಶುಕ್ರವಾರ ಅದಿವೇಶನದಲ್ಲಿ ಈ ಮಸೂದೆ ಚರ್ಚೆಗೆ ತೆರೆದುಕೊಳ್ಳಲಿದೆ. ಇದಾಗಲೇ ಮಸೂದೆ ಪ್ರತಿಯನ್ನು ಸ್ಪೀಕರ್ ಅವರಿಗೆ ನಾನು ತಲುಪಿಸಿದ್ದೇನೆ. ಈ ಅಧಿವೇಶನದಲ್ಲಿಯೂ ಅವರು ಮಸೂದೆಯ ಕುರಿತು ಚರ್ಚಿಸಲು ಅನುಮತಿಸದಿದ್ದಲ್ಲಿ, ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ" ರಘು ಆಚಾರ್ ಹೇಳಿದ್ದಾರೆ. "ಫೆಬ್ರವರಿ ಅಧಿವೇಶನದಲ್ಲಿ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳುವುದಾಗಿ ಖುದ್ದು ಸ್ಪೀಕರ್ ನನಗೆ ಭರವಸೆ ನೀಡಿದ್ದರು. ಅವರು ಹೇಳಿದ್ದ ಮಾತನ್ನು ಉಳಿಸಿಕೊಳ್ಳದಿದ್ದರೆ ನಾನು ನ್ಯಾಯಾಲಯಕ್ಕೆ ತೆರಳುತ್ತೇನೆ."